ಉಡುಪಿ: ರಜತ ಸಂಭ್ರಮದಲ್ಲಿರುವ ಶ್ರೀ ಭ್ರಾಮರೀ ನಾಟ್ಯಾಲಯ (ರಿ) ಅಮ್ಮುಂಜೆ ಉಡುಪಿ ಇದರ ನೃತ್ಯ ಮಂಥನ-10 ಕಾರ್ಯಕ್ರಮ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ
ಏಪ್ರಿಲ್ 19ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಪರ್ಯಾಯ ಶ್ರೀ ಶಿರೂರು ಮಠ, ಶ್ರೀ ಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ
ಸಾದರಪಡಿಸುವ ನೃತ್ಯ ಮಂಥನ–10” ಭರತನಾಟ್ಯ ಕೂಚಿಪುಡಿ ಹಾಗೂ ಜಾನಪದ ನೃತ್ಯ
ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು
ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಶೀರೂರು ಮಠ, ಶ್ರೀಕೃಷ್ಣ ಮಠ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶ್ರೀಮತಿ ವಿದುಷಿ ಪ್ರತಿಭಾ ಎಲ್ ಸಾಮಗ, ಹಿರಿಯ ನೃತ್ಯ ಗುರುಗಳು ಉಡುಪಿ ಇವರು ವಹಿಸಿಕೊಳ್ಳಲಿದ್ದಾರೆ.

ಅತಿಥಿ ಅಭ್ಯಾಗತರಾದ
ಡಾ| ರಮೇಶ ಶೆಟ್ಟಿ, ಸುಜ್ಞಾನ ಎಜುಕೇಶನಲ್ ಟ್ರಸ್ಟ್, ಯಡಾಡಿ ಮತ್ಯಾಡಿ
ಶ್ರೀಮತಿ ಪೂರ್ಣಿಮಾ, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ
ಶ್ರೀ ಕೆ. ಭಾಸ್ಕರ್
ನಿವೃತ್ತ ಸಹಾಯಕ ವೃತ್ತ ನಿರೀಕ್ಷಕರು ಹಾಗೂ ಗೌರವಾಧ್ಯಕ್ಷರು ಶ್ರೀ ಭ್ರಾಮರೀ ನಾಟ್ಯಾಲಯ(ರಿ.) ಅಮ್ಮುಂಜೆ
ಸೇರಿದಂತೆ ಇತರರು ಉಪಸ್ಥಿತರಿರಲಿದ್ದು, ಕಲಾ ಸಾಧಕರಾದ ಗುರು ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ, ನಿರ್ದೇಶಕರು, ಹೆಜ್ಜೆ ಗೆಜ್ಜೆ ಮಣಿಪಾಲ.
ಶ್ರೀ ಕೆ. ಮುರಲೀಧರ್ ಉಡುಪಿ, ಕೊಳಲು ವಾದಕರು
ಶ್ರೀಮತಿ ವಿನುತಾ ಆಚಾರ್ಯ, ಸಂಗೀತ ಗುರುಗಳು ಇವರಿಗೆ ಸಮ್ಮಾನ ,ಮತ್ತು
ನಾಟ್ಯಾಲಯದ ಬೆಳವಣಿಗೆಯಲ್ಲಿ ಸಹಕರಿಸಿದ
ಶ್ರೀ ಹರೀಶ್ ಪುತ್ತೂರು, ರಿದಂ ಪ್ಯಾಡ್ ವಾದಕರು
ಶ್ರೀ ಆನಂದ ಅಂಚನ್ ಗುಜ್ಜರ್ಬೆಟ್ಟು, ಪ್ರಸಾದನ ಕಲಾವಿದರು
ಶ್ರೀ ಸುರೇಶ್ ಗುಜ್ಜರ್ಬೆಟ್ಟು, ಪ್ರಸಾದನ ಕಲಾವಿದರು ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

